2ನೇ ರ್ಯಾಂಕ್ ವಿದ್ಯಾರ್ಥಿನಿಗೆ ಸನ್ಮಾನ

215

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಬಂದ ತಾಲೂಕಿನ ಕಮಲಾಕ್ಷಿ ಶರಣಪ್ಪ ಮಳಗಿ ಅನ್ನೋ ವಿದ್ಯಾರ್ಥಿನಿಯನ್ನು, ಪಟ್ಟಣದ ಬಸವ ಮಂಟಪದಲ್ಲಿ ಕಲಬುರ್ಗಿ ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.

ಅಲ್ಲದೆ ವಿದ್ಯಾರ್ಥಿನಿಯ ಮುಂದಿನ ಶೈಕ್ಷಣಿಕ ಬದುಕಿಗಾಗಿ 51 ಸಾವಿರ ರೂಪಾಯಿ ಧನ ಸಹಾಯ ಮಾಡಲಾಯಿತು. ಈ ವೇಳೆ ಫೌಂಡೇಷನ್ ಗೌರವಾಧ್ಯಕ್ಷರಾದ ಡಾ.ಎಂ.ಎಂ ಪಡಶೆಟ್ಟಿ, ಅಧ್ಯಕ್ಷರಾದ ಶಿವಲಿಂಗ ಕಲಬುರ್ಗಿ, ಶಿವಾನಂದ ಕಲಬುರ್ಗಿ, ಸಾವಿತ್ರಿ ಕಲಬುರ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!