ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಸೇರಿದಂತೆ ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. 56 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಇಲ್ಲಿ ವಿಚಿತ್ರ ಎಂದರೆ 231 ಚುನಾವಣೆಗಳನ್ನು ಎದುರಿಸಿ ಒಮ್ಮೆಯೂ ಗೆಲ್ಲದ ಕೆ.ಪದ್ಮರಾಜನ್ ಸಹ ಸ್ಪರ್ಧಿಸಿದ್ದಾರೆ. ಇವರು ಚುನಾವಣೆಯಲ್ಲಿ ಸ್ಪರ್ಧಿಸುವುದೇ ಲಿಮ್ಕಾ ರೆಕಾರ್ಡ್ ಆಗಿದೆ. ಕನಿಷ್ಠ ಸೌಲಭ್ಯದೊಂದಿಗೆ ರಾಜ್ಯಭಾರ ಮಾಡುತ್ತೇನೆ ಎಂದಿರುವ ರಾಮ್ ಕುಮಾರ್ ಶುಕ್ಲಾ, ದೆಹಲಿ ವಿವಿ ನಿವೃತ್ತ ಪ್ರೊಫೆಸರ್ ದಯಾಶಂಕರ್ ಅಗರ್ವಾಲ್, ಅಶೋಕ್ ಕುಮಾರ್ ಧಿಂಗ್ರಾ, ಸೂರಜ್ ಪ್ರಕಾಶ್ ಸೇರಿದಂತೆ 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2017ರಲ್ಲಿ 106 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.