ನಾಡೋಜ ಸುಭದ್ರಮ್ಮನಿಗೆ ನುಡಿ ನಮನ

431

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ಜುಲೈ 16ರಂದು ನಿಧನರಾದ 81 ವರ್ಷದ ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರಿಗೆ, ರಂಗಭೂಮಿ ಕಲಾವಿದೆ ನಾಗರತ್ನಮ್ಮ ಕುಟುಂಬಸ್ಥರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೋವಿಡ್ 19 ಪರಿಸ್ಥಿತಿ ಇರುವುದ್ರಿಂದ ಮನೆಯಲ್ಲಿಯೇ ಅಗಲಿದ ಹಿರಿಯ ಕಲಾವಿದೆಗೆ ಗೌರವ ಸಲ್ಲಿಸಲಾಗಿದೆ.

ಹರಹಪ್ಪನಳ್ಳಿಯ ನಿವಾಸದಲ್ಲಿ ಸೇರಿದ್ದ ಶಿಕ್ಷಕಿ ಬಿ‌.ರೇಣುಕಾ ಉಮಾಪತಿ, ರಾಘವೇಂದ್ರ, ನೇತ್ರಾವತಿ, ಬಸವರಾಜ, ಮಲ್ಲಿಕಾರ್ಜುನ, ಸ್ಪೂರ್ತಿ ಸೇರಿದಂತೆ ಹಲವರು ಗೌರವ ಸಲ್ಲಿಸಿದ್ದಾರೆ.

ರಂಗಭೂಮಿಯಲ್ಲಿ ಅಪಾರ ಸಾಧನೆ ಮಾಡಿದ ಸುಭದ್ರಮ್ಮ ಮನ್ಸೂರ್ ಅವರಿಗೆ ಹಂಪಿ ವಿವಿಯಿಂದ ನಾಡೋಜ ಪುರಸ್ಕಾರ, ಬಳ್ಳಾರಿಯ ಕೃಷ್ಣದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್, ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳು ಇವರ ಮುಡಿಗೇರಿವೆ.




Leave a Reply

Your email address will not be published. Required fields are marked *

error: Content is protected !!