ಸಿಂದಗಿ: ಸಾರ್ವಜನಿಕರಲ್ಲಿ ಸೌರಶಕ್ತಿ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಜುಲೈ 24 ರಿಂದ 31ರ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಅಂತಾ ಸಿಂದಗಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಂಜುನಾಥ ನಾಯ್ಕ ತಿಳಿಸಿದ್ದಾರೆ.
ಜುಲೈ 24 ರಂದು ಆಲಮೇಲ ಮತ್ತು ದೇವಣಗಾಂವ ಶಾಖಾ ಕಛೇರಿಯಲ್ಲಿ, 26ರಂದು ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ, 29ರಂದು ಮೋರಟಗಿ ಸಿದ್ದಮುನಿ ಆಶ್ರಮದಲ್ಲಿ, 31ರಂದು ಗೋಲಗೇರಿಯಲ್ಲಿ ಗೋಲ್ಲಾಳೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಅಂತಾ ತಿಳಿಸಿದ್ದಾರೆ. ಹೀಗಾಗಿ ಆಯಾ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯ ತನಕ ಜಾಥಾದಲ್ಲಿ ಪಾಲ್ಗೊಳ್ಳಿ ಅಂತಾ ಮನವಿ ಮಾಡಿಕೊಂಡಿದ್ದಾರೆ.