ಪ್ರಜಾಸ್ತ್ರ ಸುದ್ದಿ
ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮೊಣಕಾಲುದ್ದದ ನೀರಿನಲ್ಲಿ ದೋಣಿಯನ್ನು ಬಳಸಿಕೊಂಡು ಹೋಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಣ್ಣಾಮಲೈ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಅಪಹಾಸ್ಯ ಮಾಡುತ್ತಿದ್ದಾರೆ.
ಅಪಾರ ಮಳೆಯಿಂದಾಗಿ ಕೊಳತ್ತೂರು ಜಲಾವೃತಗೊಂಡಿದೆ. ಇಲ್ಲಿಗೆ ಭೇಟಿ ನೀಡಿದ ಅಣ್ಣಾಮಲೈ ಅಲ್ಲಿನ ಜನರನ್ನು ಸಂಪರ್ಕಿಸಿ ಮಾತನಾಡುವ ವೇಳೆ ಬೋಟಿನಲ್ಲಿ ಹೋಗಿದ್ದಾರೆ. ಸುತ್ತಲು ಜನರು, ಕಾರ್ಯಕರ್ತರು ತಿರುಗಾಡುತ್ತಾರೆ. ಮೊಣಕಾಲುದ್ದ ನೀರಿನಲ್ಲಿ ದೋಣಿ ಬಳಿಸಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.