ಅಪಘಾತ ವಲಯವಾಗುತ್ತಿದ್ಯಾ ತಾರಿಹಾಳ ರಸ್ತೆ?

343

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ರಸ್ತೆ ಅಪಘಾತದ ವಲಯ ಆಗುತ್ತಿದ್ಯಾ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ. ಯಾಕಂದರೆ, ಪದೆಪದೆ ರಸ್ತೆ ಅಪಘಾತ ಸಂಭವಿಸಿ ಹಲವರ ಪ್ರಾಣಗಳು ಹೋಗುತ್ತಿವೆ.

ಗುರುವಾರ ರಾತ್ರಿ ತಾರಿಹಾಳ ರಸ್ತೆಯ ಹತ್ತಿರದ ಡಾಭಾವೊಂದರ ಬಳಿ ನಿಂತಿದ್ದ ಲಾರಿಗೆ ಎರಡು ಬೈಕ್ ಗಳು ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಸೆಟ್ಲಮೆಂಟ್ ನಿವಾಸಿಗಳಾದ ಮಂಜುನಾಥ ಕ್ಯಾರಕಟ್ಟಿ, ವಿನೋದ ಕ್ಯಾರಕಟ್ಟಿ ಹಾಗೂ ಸುನಿಲ್ ಭಜಂತ್ರಿ ಅನ್ನೋ ಮೂವರು ಮೃತಪಟ್ಟಿದ್ದಾರೆ. ಪರಶುರಾಮ್ ನಿಟ್ಟೂರ ಎಂಬಾತ ಗಾಯಗೊಂಡಿದ್ದು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಳೆದೊಂದು ತಿಂಗಳಲ್ಲಿ ಹಲವು ಅಪಘಾತಗಳು ತಾರಿಹಾಳ ರಸ್ತೆಯಲ್ಲಿ ಆಗಿವೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸಲು ಜನರು ಭಯ ಪಡುವಂತಾಗಿದೆ. ಹೀಗೆ ಪದೆಪದೆ ಅಪಘಾತವಾಗುವುದು ತಪ್ಪಿಸಲು ಅಧಿಕಾರಿಗಳು ಏನಾದರೂ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಕೂಗು ಎದ್ದಿದೆ.




Leave a Reply

Your email address will not be published. Required fields are marked *

error: Content is protected !!