ದೇವಸ್ಥಾನ, ಮಜಾರ್ ತೆರವು

213

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೇವಸ್ಥಾನ ಹಾಗೂ ಮಜಾರ್ ನ್ನು ಭಾನುವಾರ ತೆರವುಗೊಳಿಸಲಾಗಿದೆ. ಭಜನ್ ಪುರ್ ಚೌಕ್ ನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಹೀಗಾಗಿ ರಸ್ತೆ ತೆರವು ಕಾರ್ಯಾಚರಣೆ ನಡೆಸಲಾಯಿತು.

ಇಲ್ಲಿನ ಸ್ಥಳೀಯರೊಂದಿಗೆ ಇದಕ್ಕೂ ಮೊದಲು ಧಾರ್ಮಿಕ ಸಭೆ ನಡೆಸಲಾಗಿದೆ. ಅಲ್ಲಿ ಸಹರನ್ ಪುರ ಮೇಲ್ಸೇತುವೆಗಾಗಿ ಗುಡಿ ಹಾಗೂ ಮಜಾರ್ ತೆರವು ಸಂಬಂಧ ಚರ್ಚಿಸಿ ಎಲ್ಲರ ಒಪ್ಪಿಗೆ ಪಡೆದು ಭಾನುವಾರ ತೆರವುಗೊಳಿಸಲಾಯಿತು. ಇದಕ್ಕೂ ಮೊದ್ಲು ಧಾರ್ಮಿಕ ಪೂಜೆಗಳನ್ನು ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

ಬಿಗಿ ಪೊಲೀಸ್ ಬಂದೋಬಸ್ತಿ ನಡುವೆ ದೇವಸ್ಥಾನ, ಮಜಾರ್ ತೆರವುಗೊಳಿಸಲಾಯಿತು. ಈ ಹಿಂದೆ ಧಾರ್ಮಿಕ ಗಲಾಟೆಯಿಂದಾಗಿ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆ ಇದೆ.




Leave a Reply

Your email address will not be published. Required fields are marked *

error: Content is protected !!