‘ದೆಹಲಿ ಸರ್ಕಾರ ಬೀಳಿಸಲು ಬಿಜೆಪಿಯಿಂದ 25 ಕೋಟಿ ಆಫರ್’

134

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನಮ್ಮ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ. ನಮ್ಮ 7 ಶಾಸಕರಿಗೆ 25 ಕೋಟಿ ರೂಪಾಯಿ ಆಫರ್ ನೀಡಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶನಿವಾರ ಪೋಸ್ಟ್ ಹಾಕಿರುವ ಅವರು, ಕೆಲ ದಿನಗಳಲ್ಲಿ ಕೇಜ್ರಿವಾಲ್ ರನ್ನು ಬಂಧಿಸುತ್ತೇವೆ. 21 ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಸರ್ಕಾರವನ್ನು ಬೀಳಿಸುತ್ತೇವೆ. ನೀವೂ ಬನ್ನಿ 25 ಕೋಟಿ ರೂಪಾಯಿ ನೀಡುತ್ತೇವೆ. ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿ ಎಂದಿದ್ದಾರೆ ಅಂತಾ ಬರೆದಿದ್ದಾರೆ.

ಕಳೆದ 9 ವರ್ಷಗಳಿಂದ ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ನೋಡುತ್ತಿದೆ. ದೆಹಲಿಯ ಒಳತಿಗಾಗಿ ಬಿಜೆಪಿ ಏನೂ ಮಾಡಿಲ್ಲ. ಇದು ಜನರಿಗೆ ಗೊತ್ತಿದೆ. ದೇವರು ಹಾಗೂ ಜನರು ನಮ್ಮೊಂದಿಗೆ ಇದ್ದಾರೆ. ಹೀಗಾಗಿ ಅವರ ಪ್ರಯತ್ನ ವಿಫಲವಾಗುತ್ತಿವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!