ಮೂವರಿಗೆ ಬಿತ್ತು ಅನರ್ಹತೆ ಬರೆ

450

ಬೆಂಗಳೂರು: ರಾಜೀನಾಮೆ ಸಹಜವಾಗಿರದ ಕಾರಣ ಮೂವರು ಶಾಸಕರನ್ನ ಸ್ಪೀಕರ್ ರಮೇಶಕುಮಾರ ಅನರ್ಹಗೊಳಿಸಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅವರನ್ನ ಸ್ಪೀಕರ್ ಅನರ್ಹತೆಗೊಳಿಸಿದ್ದಾರೆ.

ಸ್ಪೀಕರ್ ರಮೇಶಕುಮಾರ

ರಾಜೀನಾಮೆ ಸಹಜವಾಗಿರ್ಲಿಲ್ಲ. ಹೀಗಾಗಿ ರಾಜೀನಾಮೆ ತಿರಸ್ಕರಿಸಿದ್ದೇನೆ. ಎರಡನೇಯದಾಗಿ ಅನರ್ಹತೆ ಕೈಗೆತ್ತಿಕೊಂಡು ನಿರ್ಧಾರ ಕೈಗೊಂಡಿದ್ದೇನೆ ಅಂತಾ ಸ್ಪೀಕರ್ ರಮೇಶಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಹಾಗೂ ಆರ್.ಶಂಕರ, ಪ್ರಸ್ತುತ ವಿಧಾನಸಭೆ ಅವಧಿ ಮುಗಿಯುವ ತನಕ ಅನರ್ಹ ಎಂದು ಸ್ಪೀಕರ್ ಹೇಳಿದ್ದಾರೆ. ಅಂದ್ರೆ ಮೂರು ವರ್ಷ ಹತ್ತು ತಿಂಗಳು ಈ ಶಾಸಕರು ಯಾವುದೇ ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ.

ರಾಜೀನಾಮೆ ಸ್ಪೀಕಾರ ಅನ್ನೋದು ಗೌರವ ಇದ್ದಂತೆ. ಅನರ್ಹತೆ ಅನ್ನೋದು ಛಿಮಾರಿ ಹಾಕಿದಂತೆ ಅಂತಾ ಸ್ಪೀಕರ್ ರಮೇಶಕುಮಾರ ಈ ವೇಳೆ ಹೇಳಿದ್ರು. ಇನ್ನುಳಿದ ಶಾಸಕರ ವಿಚಾರಣೆ ಬಾಕಿಯಿರುವ ಕಾರಣ, ಅವರ ನಿರ್ಧಾರ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!