‘ತಾಲೂಕು ಪತ್ರಕರ್ತರಿಗೂ ಆಯುಷ್ಮಾನ್ ಭಾರತ್ ಕಾರ್ಡ್ ಕೊಡಿ’

327

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರಾಜ್ಯ ಸರ್ಕಾರ ಈಗಾಗ್ಲೇ ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಆಯುಷ್ಮಾನ್ ಭಾರತ್ ಕಾರ್ಡ್ ನೀಡುತ್ತಿದೆ. ಇದರ ಜೊತೆಗೆ ತಾಲೂಕು ಮಟ್ಟದ ಪತ್ರಕರ್ತರಿಗೂ ಈ ಸೌಲಭ್ಯ ಒದಗಿಸಬೇಕೆಂದು, ಕಾರ್ಯನಿರತ ಪತ್ರಕರ್ತ ಸಂಘ ಸಿಂದಗಿ ತಾಲೂಕು ಘಟಕದಿಂದ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

ಈ ವೇಳೆ ಮಾತ್ನಾಡಿದ ಪ್ರಕಾಶ ಬಡಿಗೇರ, ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಆರೋಗ್ಯ ವಿಮೆ ಕೊಡ್ತಿರುವುದು ಒಳ್ಳೆಯ ಕೆಲಸ. ಇದೆ ರೀತಿ ಹೋಬಳಿ, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸ್ತಿರುವ ಪತ್ರಕರ್ತರಿಗೂ ವಿಸ್ತರಿಸಬೇಕು ಎಂದು ಹೇಳಿದ್ರು. ಇನ್ನು ತಾಲೂಕು ಪತ್ರಿಕಾ ಭವನಕ್ಕೆ ಜಾಗ ಒದಗಿಸುವ ಕುರಿತು ಸಹ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಲಾಯ್ತು.

ಈ ಸಂದರ್ಭದಲ್ಲಿ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲಾಪುರ, ಖಜಾಂಚಿ ನಿಂಗರಾಜ ಅತ್ನೂರ, ರಮೇಶ ಪೂಜಾರಿ, ಪಂಡಿತ ಯಂಪೂರೆ, ಟಿ.ಕೆ ಮಲಗೊಂಡ, ಸಿದ್ದಲಿಂಗ ಕಿಣಗಿ, ಸಲೀಂ ಮರ್ತೂರ, ಗುಂಡು ಕುಲ್ಕರ್ಣಿ, ಅಂಬರೀಶ ಸುಣಗಾರ, ಶಿವಾನಂದ ಬಿರಾದಾರ, ಮಹಾಂತೇಶ ನೂಲನ್ನವರ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!