ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕೋವಿಡ್ 19 ಮಹಾಮಾರಿಯಿಂದಾಗಿ ಜನರಿಗೆ ಸಾಕಷ್ಟು ಭಯ ಮೂಡಿದೆ. ಹೀಗಾಗಿ ಎಲ್ಲಿಯಾದ್ರೂ ಮಾತ್ರೆ ಪಾಕೇಟ್, ಇಂಜೆಕ್ಷನ್ ಗಳು, ಔಷಧಿ ಬಾಕ್ಸ್ ಗಳು ಬಿದ್ದಿರುವುದು ಕಂಡ್ರೆ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಹೀಗಿರುವಾಗ ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯಲ್ಲಿ ಇಂಜೆಕ್ಷನ್ ರಾಶಿ, ಔಷಧಿ ಬಾಟಲ್ ಎಸೆದು ಹೋಗಲಾಗಿದೆ.
3ನೇ ವಾರ್ಡಿನ ಮಲ್ಲಯ್ಯನ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬರುವ ರಾಘವೇಂದ್ರ ಜೋಶಿ ಹಾಗೂ ರವಿ ಹಿರೇಕುರುಬರ ಎಂಬುವರ ಮನೆಯ ಮುಂದಿನ ಗೇಟ್ ಹತ್ತಿರವೇ ಇಂಜೆಕ್ಷನ್ ಗಳನ್ನ ಎಸೆದು ಹೋಗಲಾಗಿದೆ. ಇದ್ರಿಂದಾಗಿ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರು ತಿರುಗಾಡುವ ರಸ್ತೆಯಲ್ಲಿ ಬಳಸಿದ ಇಂಜೆಕ್ಷನ್, ಔಷಧಿ ಬಾಟೆಲ್ ಗಳನ್ನ ಎಸೆದು ಹೋಗಲಾಗಿದೆ. ಸಣ್ಣಪುಟ್ಟ ಮಕ್ಕಳು ಇಲ್ಲಿಯೇ ಆಟವಾಡುವುದ್ರಿಂದ ಓಣಿಯ ಜನರು ಆತಂಕದಲ್ಲಿದ್ದಾರೆ. ಪುರಸಭೆ ಅಧಿಕಾರಿಗಳಿಗೆ ಫೋನ್ ಮಾಡಿದ್ರೆ ಸ್ಪಂದಿಸ್ತಿಲ್ಲ. ತಾಲೂಕು ಆರೋಗ್ಯ ಅಧಿಕಾರಿಗಳ ಫೋನ್ ಸ್ವೀಚ್ ಆಫ್ ಬರ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ.
ನಿಂಗು ಹಿರೇಕುರಬರ, 3ನೇ ವಾರ್ಡ್ ನಿವಾಸಿ