ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಕುಮಸಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನ ಅನಾವರಣ ಮಾಡುವ ಮೂಲಕ ಅವರ 151ನೇ ಜಯಂತಿಯನ್ನ ಆಚರಿಸಲಾಯ್ತು. ಶಾಸಕ ಎಂ.ಸಿ ಮನಗೂಳಿ ಅವರು ಪುತ್ಥಳಿ ಅನಾವರಣಗೊಳಿಸಿದ್ರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಕಮಸಗಿಯ ವೆಂಕಟೇಶ್ವರ ಮಠದ ಪ.ಪೂ.ಶ್ರೀಅಭಿನವ ವೆಂಕಟೇಶ್ವರ ಸ್ವಾಮಿಗಳು ವಹಿಸಿಕೊಂಡಿದ್ರು. ಮುಖ್ಯ ಅತಿಥಿಗಳಾಗಿ ಇಂಡಿಯ ಶಾಂತವೀರೇಶ್ವರ ಕಾಲೇಜು ಪ್ರಾಧ್ಯಾಪಕ ಆರ್.ಬಿ ಜೋಶಿ ಹಾಗೂ ಸಾಹಿತಿ ಸಿದ್ರಾಮ ಪಾಟೀಲ ಭಾಗವಹಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ಸಿದ್ದು ಬಡಿಗೇರ, ಶಿವಲಿಂಗ ಯಾತನೂರ, ಚಂದ್ರಕಾಂತ ಸಿಂಘೆ, ದವಲಪ್ಪ ಸೊನ್ನ, ಖಾಜಪ್ಪ ಶಂಭೇವಾಡ, ಸಿದ್ರಾಮಪ್ಪ ಉಪ್ಪಿನ, ಎಸ್.ಎಸ್ ಧನಶೆಟ್ಟಿ ಸೇರಿದಂತೆ ಹಲವು ಉಪಸ್ಥಿತರಿದ್ರು.