ವಿಜಯಪುರ ಜಿಲ್ಲಾ ಕಸಾಪ ಚುನಾವಣೆ: 21 ನಾಮಪತ್ರ ಸಲ್ಲಿಕೆ

244

ಸಾಹಿತ್ಯ ಮತ್ತು ರಂಗಭೂಮಿ

ವಿಜಯಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಸಂಬಂಧಿಸಿದಂತೆ ಅಂತಿಮವಾಗಿ 12 ಜನರು ನಾಮಪತ್ರ ಸಲ್ಲಿಸಿದ್ದಾರೆ. 12 ಜನರಿಂದ 21 ನಾಮಪತ್ರ ಸಲ್ಲಿಕೆಯಾಗಿವೆ.

ಮಲ್ಲಿಕಾರ್ಜುನ ಭೃಂಗಿಮಠ, ಕಲ್ಲಪ್ಪ ಶಿವಶರಣ, ಜಂಬೂನಾಥ ಕಂಚ್ಯಾಣಿ, ಬಂಡೆಪ್ಪ ತೇಲಿ, ಹಾಸೀಂಪೀರ ವಾಲಿಕಾರ, ಮಹಾದೇವ ರಬಿನಾಳ, ಶೈಲಾ ಆಳೂರ, ಶಿವಾನಂದ ಮಂಗಾನವರ, ಮಲ್ಲಿಕಾರ್ಜುನ ಯಂಡಿಗೇರಿ, ಬಸವರಾಜ ಕುಂಬಾರ, ಬಸವರಾಜ, ಮುತ್ತಣ್ಣ ಕಬಾಡಿ ನಾಮಪತ್ರ ಸಲ್ಲಿಸಿದ್ದಾರೆ. ನಾಮ ಪತ್ರ ಹಿಂಪಡೆಯಲು ಎಪ್ರಿಲ್ 12ಕ್ಕೆ ಕೊನೆಯ ದಿನವಾಗಿದೆ.

ಮೇ 9ರಂದು ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾಧ್ಯಕ್ಷರ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ. ಮೇ 12ರಂದು ಫಲಿತಾಂಶ ಪ್ರಕಟಿಸಲಾಗುತ್ತೆ. ಈ ಬಾರಿ 3 ಲಕ್ಷಕ್ಕೂ ಹೆಚ್ಚು ಮತದಾರರು ವೋಟ್ ಮಾಡಲಿದ್ದಾರೆ. ಇದಕ್ಕಾಗಿ 400ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!