ಕೊಹ್ಲಿ, ತಮನ್ನಾ ಬಂಧನಕ್ಕೆ ಅರ್ಜಿ ಸಲ್ಲಿಸಿದ್ಯಾರು? ಯಾಕೆ?

365

ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಹೀರೋ ವಿರಾಟ ಕೊಹ್ಲಿ ಹಾಗೂ ಸೌಥ್ ಇಂಡಿಯನ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಬಂಧನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅರೇ, ಇವರನ್ಯಾಕೆ ಬಂಧಿಸಬೇಕು. ಇವರೇನು ತಪ್ಪು ಮಾಡಿದ್ದಾರೆ ಅಂತಾ ಕೇಳಿದ್ರೆ ಕಾರಣ ಇಲ್ಲಿದೆ ನೋಡಿ..

ವಿರಾಟ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಆನ್ಲೈನ್ ಜೂಜಾಟಕ್ಕೆ ಪ್ರಚೋದನೆ ನೀಡ್ತಿದ್ದಾರೆ. ಆನ್ಲೈನ್ ಜೂಜಾಟದ ಜಾಹೀರಾತಿನಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಇದ್ರಿಂದ ಯುವಕರ ದಾರಿ ತಪ್ಪಿಸ್ತಿದ್ದಾರೆ. ಹೀಗಾಗಿ ಇವರನ್ನ ಬಂಧಿಸಬೇಕೆಂದು ಮದ್ರಾಸ್ ಹೈಕೋರ್ಟ್ ಗೆ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಆನ್ಲೈನ್ ಜೂಜಾಟಕ್ಕೆ ಯುವಕರು ಬಲಿಯಾಗ್ತಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿ ವಿಚಾರಣೆಯನ್ನ ಮದ್ರಾಸ್ ಹೈಕೋರ್ಟ್ ಆಗಸ್ಟ್ 4ರಂದು ವಿಚಾರಣೆ ನಡೆಸ್ತಿದೆ. ಕನ್ನಡದಲ್ಲಿಯೂ ಕಿಚ್ಚ ಸುದೀಪ ವಿರುದ್ಧ ಕೆಲ ಕನ್ನಡಪರ ಸಂಘಟನೆಗಳು ಇಂತಹದೆ ವಿಚಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ವು.




Leave a Reply

Your email address will not be published. Required fields are marked *

error: Content is protected !!