ಬೆಂಗಳೂರು: ನಗರದಲ್ಲಿ ಡಿ.ಕೆ ಶಿವಕುಮಾರ ಪರವಾಗಿ ಒಕ್ಕಲಿಗರ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಮಾತ್ನಾಡಿರುವ ಶಾಸಕ ಕೃಷ್ಣ ಭೈರೇಗೌಡ, ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕಾಫೀ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವು ಆತ್ಮಹತ್ಯೆ ಅಲ್ಲ. ಅದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.
ಐಟಿ, ಇಡಿ ಸಂಸ್ಥೆಗಳನ್ನ ಕೇಂದ್ರ ಸರ್ಕಾರ ಸೀಳು ನಾಯಿಗಳಂತೆ ಬಳಸಿಕೊಳ್ತಿದೆ. ವಿಜಯ ಮಲ್ಯ, ನೀರವ ಮೋದಿ ಹಾಗೂ ಚೋಕ್ಸಿ ಮೇಲೆ ಯಾಕೆ ಐಟಿ ರೇಡ್ ಆಗಿಲ್ಲ ಅಂತಾ ಕೇಳಿದ್ದಾರೆ. ಹೀಗಾಗಿ ಸಿದ್ಧಾರ್ಥ ಸಾವು ಆತ್ಮಹತ್ಯೆಯಲ್ಲ. ಐಟಿ ಇಲಾಖೆ ಮೂಲಕ ನಡೆದ ಕೊಲೆ ಎಂದು ಆರೋಪಿಸಿದ್ದಾರೆ.