ಶಿವಮೊಗ್ಗ: ಸಾಗರ ತಾಲೂಕಿನ ಸಿಂಗದೂರು ಚೌಡೇಶ್ವರ ದೇಗುಲದ ಬಳಿಯ ಹಿನ್ನೀರಿನಲ್ಲಿ ಎರಡು ಲಾಂಚ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಚಾಲಕರ ನಿರ್ಲಕ್ಷ್ಯದಿಂದ ಶರಾವತಿ 1 ಮತ್ತು ಶರಾವತಿ 2ರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಈ ಒಂದು ಘಟನೆಯಿಂದ ಪ್ರಯಾಣಿಕರೆಲ್ಲ ಭಯಭೀತರಾಗಿದ್ರು. ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತವೊಂದು ತಪ್ಪಿದೆ. ಯಾಕಂದ್ರೆ, ಬರೋಬ್ಬರಿ 500 ಜನ ಪ್ರಯಾಣಿಕರನ್ನ ಹೊಂದಿದ್ದ ಲಾಂಚ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ಮೊದ್ಲೇ ನದಿ ತುಂಬಿ ಹರಿಯುತ್ತಿದ್ದು ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಈ ಎರಡು ಲಾಂಚ್ ಗಳು ಒಳನಾಡು ಬಂದರು ಇಲಾಖೆಗೆ ಸೇರಿವೆ. ಚಾಲಕರಾದ ಸುನೀಲ ಮತ್ತು ಮಂಜಪ್ಪ ಅನಧಿಕೃತ ಡ್ರೈವರ್ ಗಳೆಂದು ತಿಳಿದು ಬಂದಿದೆ.