ವಾಯು ವಿಹಾರಿಗಳಿಂದ ಒಂದೊಳ್ಳೆ ಕೆಲಸ

259

ಪ್ರಜಾಸ್ತ್ರ ಸುದ್ದಿ

ಕೆ.ಆರ್ ಪುರ: ವಾಯು ವಿಹಾರಿಗಳೆಲ್ಲ ಸೇರಿಕೊಂಡು ಕೆರೆ ಸ್ವಚ್ಛತಾ ಸಿಬ್ಬಂದಿಗೆ ಶೆಡ್ ನಿರ್ಮಿಸಿಕೊಡುವ ಮೂಲಕ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಬಸವನಪುರ ವಾರ್ಡ್ ವ್ಯಾಪ್ತಿಯಲ್ಲಿರುವ ಸೀಗೆಹಳ್ಳಿ ಕೆರೆಯ ಸ್ವಚ್ಛತೆ ಹಾಗೂ ಇಲ್ಲಿನ ಗಿಡಗಳಿಗೆ ನೀರೂಣಿಸುವ ಕೆಲಸಕ್ಕೆ ಸಿಬ್ಬಂದಿ ನೇಮಕವಾಗಿದ್ರು.

ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಶೆಡ್ ವೊಂದರಲ್ಲಿ ಸಿಬ್ಬಂದಿ ವಾಸವಾಗಿದ್ರು ಹೆಸರಿಗೆ ಅದೊಂದು ಶೆಡ್ ಆಗಿತ್ತು. ಎಲ್ಲವೂ ಮುರಿದು ಹೋಗಿದ್ದು ಹಾವು, ಚೇಳುಗಳ ಸಹ ಅಲ್ಲಿಗೆ ಬರ್ತಿದ್ವು. ಇದನ್ನ ನೋಡಿದ ವಾಯು ವಿಹಾರಿಗಳು ಇವರಿಗೊಂದು ಶೆಡ್ ನಿರ್ಮಿಸಿಕೊಟ್ಟಿದ್ದಾರೆ.

ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಯುನೈಟೆಡ್ ವೇ ಅವರೊಂದಿಗೆ ಕೂಡಿಕೊಂಡು ಇರೋ ಜಾಗದಲ್ಲಿ ಸುಸಜ್ಜಿತವಾದ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಇದ್ರಿಂದಾಗಿ ಈ ಬಡ ಕುಟುಂಬಕ್ಕೆ ಮಳೆ, ಬಿಸಿಲಿನಿಂದ ಒಂದಿಷ್ಟು ರಕ್ಷಣೆ ಸಿಕ್ಕಿದೆ. ನಡಿಗೆದಾರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!