ಪ್ರಜಾಸ್ತ್ರ ಸುದ್ದಿ
ಹಾಸನ: ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, 1,344 ಕೋಟಿ ವೆಚ್ಚದ ಜಿಲ್ಲೆಯಲ್ಲಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಗೃಹ ಲಕ್ಷ್ಮಿ ಯೋಜನೆ ಅಡಿ 477 ಕೋಟಿ, ಶಕ್ತಿ ಯೋಜನೆ ಅಡಿ 166 ಕೋಟಿ, ಅನ್ನಭಾಗ್ಯ ಯೋಜನೆ ಅಡಿ 135 ಕೋಟಿ ನೀಡಿದ್ದೇವೆ. ಗೃಹಜ್ಯೋತಿ ಅಡಿ 89 ಕೋಟಿ ಉಳಿತವಾಗಿದೆ. ಹೀಗೆ ರಾಜ್ಯದ ಜನರ ತೆರಿಗೆ ಹಣವನ್ನೇ ನಾವು ಅಭಿವೃದ್ಧಿಗೆ ಕೊಡುತ್ತೇವೆ. ಇದನ್ನೇ ನಾವು ಮೋದಿಗೆ ಹಣ ಕೊಡಿ ಎಂದರೆ ಬಿಜೆಪಿಗೆ ಸಿಟ್ಟು ಬರುತ್ತದೆ ಅಂತಾ ವಾಗ್ದಾಳಿ ನಡೆಸಿದರು.
ಗ್ಯಾರೆಂಟಿ ಯೋಜನೆಗಳಿಂದ ಶೇಕಡ 50ರಷ್ಟು ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಎಲ್ಲ ಸಮುದಾಯದ, ಧರ್ಮದ ಜನರಿದ್ದಾರೆ. ನಾವು ಯಾವುದೇ ರೀತಿಯಿಂದ ಭೇದಭಾವ ಮಾಡುತ್ತಿಲ್ಲ. ಯಾವುದೇ ಧರ್ಮವನ್ನು ನಾವು ದ್ವೇಷಿಸಬಾರದು. ಸಂವಿಧಾನದ ಅಡಿಯಲ್ಲಿ ಸರ್ಕಾರಗಳು ಕೆಲಸ ಮಾಡಬೇಕು ಅಂತಾ ಹೇಳಿದರು.
ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ರಾಜಣ್ಣ, ಶಾಸಕರಾದ ಭೈರತಿ ಬಸವರಾಜ್, ಶಿವರಾಮೇಗೌಡ ಸೇರಿ ಇತರರು ಉಪಸ್ಥಿತರಿದ್ದರು.