ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಸ್ಥಿಯನ್ನು ಮೂರು ದಿನಗಳ ನಂತರ ವಿಸರ್ಜನೆ ಮಾಡಲಾಗುವುದು ಎಂದು, ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಬುಧುವಾರ ತಿಳಿಸಿದ್ದಾರೆ.
ಶ್ರೀಗಳ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿ ನಡೆಸಲಾಗುತ್ತೆ. ಚಿತೆಗೆ ಹಾಲು, ನೀರು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಚಿತಾ ಭಸ್ಮ ಎಲ್ಲಿ ಹೇಗೆ ವಿಸರ್ಜನೆ ಮಾಡಬೇಕು ಎನ್ನುವುದನ್ನು ಚರ್ಚಿಸುತ್ತೇವೆ. ಭಕ್ತರಿಗೆ ಚಿತಾ ಭಸ್ಮ ಕೊಡುವುದಿಲ್ಲ. ವಿಭೂತಿ ಪಡೆದು ಚಿತಾ ಭಸ್ಮದ ಹತ್ತಿರ ಇಟ್ಟು ಅದನ್ನು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.