ಪ್ರಜಾಸ್ತ್ರ ಸುದ್ದಿ
ಉಡುಪಿ: ಪರಿಸರಕ್ಕೆ ಹಾನಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿರುವ ಅದಾನಿ ಗ್ರೂಪಿಗೆ ಸೇರಿದ ಯುಪಿಸಿಎಲ್ ಗೆ ಚೆನ್ನೈನ ಹಸಿರು ದಕ್ಷಿಣ ವಲಯ ಪೀಠವು 52 ಕೋಟಿ ರೂಪಾಯಿ ದಂಡ ವಿಧಿಸಿದೆ.
ಇಲ್ಲಿನ ಪಡುಬಿದ್ರೆ ಹತ್ತಿರದ ಎಲ್ಲೂರು ಗ್ರಾಮದಲ್ಲಿರುವ ಗೌತಮ್ ಅದಾನಿ ಮಾಲೀಕತ್ವದ ಕಲ್ಲಿದ್ದಲು ಆಧರಿತ ಉಷ್ಣು ವಿದ್ಯುತ್ ಸ್ಥಾವರದಿಂದಾಗಿ ಸುಮಾರು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯಾಗಿದೆ. ಹೀಗಾಗಿ ಹಸಿರು ಪೀಠ ದಂಡ ವಿಧಿಸಿದೆ.
ಜನ ಜಾಗೃತಿ ಸಮಿತಿ, ಉಷ್ಣು ವಿದ್ಯುತ್ ಸ್ಥಾವರಿಂದ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪಿರಾಣಮ ಬೀರಿದೆ ಎಂದು ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪೀಠ ದಂಡ ವಿಧಿಸಿ ತೀರ್ಪು ನೀಡಿದೆ.