ಬ್ರೇಕಿಂಗ್ ನ್ಯೂಸ್: ಡ್ರೈವರ್ ಯಡವಟ್ಟಿಗೆ 2 ಜೀವ ಬಲಿ

387

ವಿಜಯಪುರ: ವಾಹನ ಸವಾರರು ಒಮ್ಮೊಮ್ಮೆ ಮಾಡಿಕೊಳ್ಳುವ ಯಡವಟ್ಟಿನಿಂದ ಆಗುವಂತಾ ಅನಾಹುತಗಳು ಅಷ್ಟಿಷ್ಟಲ್ಲ. ಜೀವಗಳು ಹೋಗುವ ಸಾಧ್ಯತೆಯಿರುತ್ತೆ. ಇಂತಾ ಘಟನೆಯಿಂದ ಎರಡು ಜೀವಗಳು ಬಲಿಯಾದ ಘಟನೆ ಕೊಲ್ಹಾರ ಬಳಿ ನಡೆದಿದೆ.

ವಾಹನ ದಾಖಲೆ ತಪಾಸಣೆ ಮಾಡ್ತಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಅವಸರದಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ಟಂಟಂವೊಂದು ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿದೆ. ಇದ್ರಿಂದಾಗಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.  ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಕೊಲ್ಹಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಗ್ರಾಮಸ್ಥರ ನಡುವೆ ಗಲಾಟೆಯಾಗಿದೆ. ಈ ವೇಳೆ ಪಿಎಸ್ಐಗೆ ಗಾಯವಾಗಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರಿಗೆ ನಿಯಮದ ದಂಡ ವಸೂಲಿ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದು ರಾಜ್ಯದಲ್ಲಿ ನಡೆದ ಮೊದಲ ಪ್ರಕರಣವಾಗಿದೆ.




Leave a Reply

Your email address will not be published. Required fields are marked *

error: Content is protected !!