ಭೀಕರ ಬೈಕ್ ಅಪಘಾತ: ವೈದ್ಯರಿಲ್ಲದ್ದಕ್ಕೆ ಸಿಂದಗಿ ತಾಲೂಕಾಸ್ಪತ್ರೆ ವಸ್ತುಗಳು ಪೀಸ್ ಪೀಸ್!

689

ಸಿಂದಗಿ: ಪಟ್ಟಣದ ಸಿಪಿಐ ಕಚೇರಿ ಹತ್ತಿರ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಸಿದೆ. ಬಸಪ್ಪ ಬಿರಾದಾರ ಹಾಗೂ ಕೊರವಾರ ಎಂದು ಅಡ್ರೆಡಸ್ ತಿಳಿದು ಬಂದಿರುವ ಯುವಕನಿಗೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಸುಮಾರು 10 ಗಂಟೆ ಟೈಂನಲ್ಲಿ ಈ ಒಂದು ಘಟನೆ ನಡೆದಿದೆ. ಅಪಘಾತ ಸಂಭವಿಸಿದ ಸ್ಥಳ ತಾಲೂಕು ಆಸ್ಪತ್ರೆ ಹತ್ತಿರವೇ ಇದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರೆ, ಆಸ್ಪತ್ರೆಯಲ್ಲಿ ವೈದ್ಯರೇ ಇರ್ಲಿಲ್ಲ. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಲಾಗಿದೆ. ಇದ್ರಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿನ ವಸ್ತುಗಳಿಗೆ ಹಾನಿಯಾಗಿದೆ. ಕೆಲಸದ ಸಮಯದಲ್ಲಿ ವೈದ್ಯರು ಇಲ್ಲದ ಕಾರಣಕ್ಕೆ, ಆಕ್ರೋಶಗೊಂಡ ಸ್ಥಳೀಯರು ಗಲಾಟೆ ಮಾಡಿದ್ದಾರೆ.

ಅಪಘಾತದ ತೀವ್ರತೆಗೆ ಸಾಕ್ಷಿ

ಸಿಂದಗಿ ಪಟ್ಟಣದ ಯುವಕ ಬೈಕ್ ತೊಳೆದುಕೊಂಡು ಆಲಮೇಲ ಮಾರ್ಗವಾಗಿ ಬರ್ತಿದ್ದ, ಕಲ್ಲಳ್ಳಿ ಗ್ರಾಮದ ಬಸಪ್ಪ ಬಿರಾದಾರ ಹಾಗೂ ಇನ್ನೋರ್ವ ಸಿಂದಗಿಯಿಂದ ಗ್ರಾಮದ ಕಡೆ ಹೋಗ್ತಿರುವಾಗ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕಲ್ಲಳ್ಳಿ ಗ್ರಾಮದ ಬೈಕ್ ಸವಾರರು ಮೇಲ್ನೋಟಕ್ಕೆ ಪಾನಮತ್ತರಾಗಿದ್ರು ಅಂತಾ ಸ್ಥಳೀಯರು ಮಾತ್ನಾಡಿಕೊಳ್ತಿದ್ದಾರೆ.

ಕರ್ತವ್ಯದ ಸಮಯದಲ್ಲಿ ಚಕ್ಕರ್ ಹೊಡೆದ್ರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಅಂತಾ ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಹೇಳಿರುವುದು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಆರೋಗ್ಯ ಸಚಿವರು ಏನ್ ಹೇಳಿದ್ರೂ ಡೋಂಟ್ ಕೇರ್ ಎನ್ನಲಾಗ್ತಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡವರನ್ನ ಜಿಲ್ಲಾಸ್ಪತ್ರೆಗೆ ಸಾಗಿಸ್ತಿರುವುದು
ಆಸ್ಪತ್ರೆ ಒಳಗೆ ಗಲಾಟೆ



Leave a Reply

Your email address will not be published. Required fields are marked *

error: Content is protected !!