ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿಗೆ ದೋಸ್ತಿ ಪಾರ್ಟಿಯ ಬೇಡಿಕೆ ಟೆನ್ಷನ್ ಕೊಡ್ತಿದೆ. ಶಿವಸೇನ ನೀಡ್ತಿರುವ ಬೇಡಿಕೆ ಲಿಸ್ಟ್ ನಿಂದ ಬಿಜೆಪಿಗೆ ಸರ್ಕಾರ ರಚನೆ ಮಾಡುವುದು ಕಗ್ಗಂಟಾಗಿದೆ. ಇದ್ರಿಂದಾಗಿ ಫಲಿತಾಂಶ ಬಂದು ವಾರ ಕಳೆಯುತ್ತಿದ್ರೂ ಸರ್ಕಾರ ರಚನೆ ಬಗ್ಗೆ ಯಾರೂ ಮಾತ್ನಾಡ್ತಿಲ್ಲ.
ಕಗ್ಗಂಟಾಗಿರುವ ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ಕೇಂದ್ರ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಬುಧವಾರ ಮುಂಬೈಗೆ ಭೇಟಿ ನೀಡ್ತಿದ್ದಾರೆ. ನೂತನ ಶಾಸಕರ ಜೊತೆ ಸಭೆ ನಡೆಸಲಿದ್ದು, ಬಳಿಕ ಶಿವಸೇನ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರನ್ನ ಭೇಟಿ ಮಾಡಲಿದ್ದಾರೆ.
ಶಿವಸೇನ 50-50 ಸರ್ಕಾರ ರಚನೆಗೆ ಪ್ಲಾನ್ ಮಾಡ್ತಿದೆ. ಇದರ ಜೊತೆಗೆ ಮೊದಲ ಬಾರಿಗೆ ಶಾಸಕರಾಗಿರುವ ಆದಿತ್ಯ ಕಾಠ್ರೆ ಅವರನ್ನ ಸಿಎಂ ಆಗಿ ಮಾಡಬೇಕೆಂದು ಬೇಡಿಕೆ ಇಟ್ಟಿದೆ. ಹೀಗಾಗಿ ಅಕ್ಟೋಬರ್ 30ರಂದು ಉದ್ಭವ್ ಠಾಕ್ರೆಯೊಂದಿಗೆ ಅಮಿತ ಶಾ ಮಾತುಕತೆ ನಡೆಸಲಿದ್ದಾರೆ.