ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ರಾಜ್ಯದಲ್ಲಿ ಭಾನುವಾರ ಗ್ರಾಮ ಪಂಚಾಯ್ತಿ ಚುನಾವಣೆಗೆ 2ನೇ ಹಂತದ ಮತದಾನ ನಡೆಯಿತು. ಅದೇ ರೀತಿ ಕೋಟೆ ನಾಡಿನ ಹಿರಿಯೂರು ತಾಲೂಕಿನ ಬಿರೇನಹಳ್ಳಿ ಗ್ರಾಮದಲ್ಲಿ ನಡೆದ ಮತದಾನದಲ್ಲಿ ವೃದ್ಧೆಯೊಬ್ಬರು ವೋಟ್ ಹಾಕಿದ್ದಾರೆ.
ಹೀಗೆ ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದ 92 ವರ್ಷದ ವೃದ್ಧೆ ಸರೋಜಮ್ಮ ಕೊನೆಯುಸಿರೆಳೆದಿದ್ದಾರೆ. ಮೊಮ್ಮಗನ ಜೊತೆಗೆ ಮನೆಗೆ ಹೊರಟಿದ್ದ ವೃದ್ಧೆ ಮೃತಪಟ್ಟಿದ್ದಾಳೆ.