ಫೈನಾನ್ಸ್ ಬ್ಯಾಂಕ್ ದರೋಡೆಗೆ ಯತ್ನ

562

ವಿಜಯಪುರ: ನಗರದ ಆಶ್ರಮ ಕಾಲೋನಿ ಹತ್ತಿರದ ಫೈನಾನ್ಸ್ ಬ್ಯಾಂಕ್ ವೊಂದರಿಂದ ಹಣ ಲೂಟಿ ಮಾಡಲು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಹಾಡಹಗಲೇ ವಿಜಯಪುರದಲ್ಲಿ ಗನ್ ತೋರಿಸಿ ದರೋಡೆಗೆ ಯತ್ನಿಸಲಾಗಿದೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಶ್ರಮ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ನಲ್ಲಿ ದರೋಡೆಗೆ ಯತ್ನಿಸಲಾಗಿದೆ. ನಾಲ್ವರಿಂದ ಈ ಕೃತ್ಯ ನಡೆದಿದೆ. ಶುರುವಿನಲ್ಲಿ ಇಬ್ಬರು ಗ್ರಾಹಕರ ಗೆಟಪ್ ನಲ್ಲಿ ಬ್ಯಾಂಕ್ ಗೆ ಬಂದಿದ್ದಾರೆ. ಉಂಗುರ ಅಡ ಇಡುವ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ ಓರ್ವ ಎಂಟ್ರಿ ಕೊಟ್ಟು ಪಿಸ್ತೂಲ್ ಹಿಡಿದು ಹೆದರಿಸಿದ್ದಾನೆ. ಇವರ ಜೊತೆಯಿದ್ದ ಇನ್ನೊಬ್ಬ ಸೇರಿದಂತೆ ಮೂವರು ಬ್ಯಾಂಕ್ ಸಿಬ್ಬಂದಿ ಮೇಲೆ ಬಿದ್ದಿದ್ದಾರೆ.

ಪಿಸ್ತೂಲ್ ಹಿಡಿದು ಫೈನಾನ್ಸ್ ಲಾಕರ್ ತೆಗೆಲು ಹೇಳಿದ್ದಾನೆ. ಈ ವೇಳೆ ಮ್ಯಾನೇಜರ್ ಸಮಯಪ್ರಜ್ಞೆಯಿಂದ ಸೈರನ್ ಬಟನ್ ಒತ್ತಿದ್ದಾರೆ. ಸೈರನ್ ಸದ್ದು ಕೇಳ್ತಿದ್ದಂತೆ ದರೋಡೆಕೋರರು ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಈ ಘಟನೆ ಸಂಬಂಧ ಎಸ್ಪಿ ಅನುಮಪ ಅಗರವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.




Leave a Reply

Your email address will not be published. Required fields are marked *

error: Content is protected !!