ಸಿನಿ ಪ್ರಿಯರನ್ನ ಚಿತ್ರಮಂದಿರಗಳತ್ತ ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನ ಮಾಡಲಾಗುತ್ತೆ. ಡಿಫರೆಂಟ್ ಆಗಿ ಪ್ಲಾನ್ ಮಾಡಿ ಜನರ ಮನಸ್ಸು ಗೆಲ್ಲಲು ಗಿಫ್ಟ್ ಗಳನ್ನ ನೀಡುತ್ತೆ. ಆಫರ್ ನೀಡಲಾಗುತ್ತೆ. ಆ ಸಾಲಿಗೆ ಶ್ರೀಭರತ-ಬಾಹುಬಲಿ ಚಿತ್ರ ತಂಡ ಸೇರಿದೆ. ಆದ್ರೆ, ಅದು ಬರೋಬ್ಬರಿ 1 ಕೋಟಿಯ ಗಿಫ್ಟ್.
ಜನವರಿ 17ರಂದು ಸಿನ್ಮಾ ರಿಲೀಸ್ ಆಗ್ತಿದೆ. ಮೊದಲ ಎರಡು ವಾರ ಸಿನ್ಮಾ ನೋಡುವ ಪಕ್ಷೇಕರಿಗೆ ಒಂದು ಕೋಪನ್ ನೀಡಲಾಗುತ್ತೆ. 14ನೇ ದಿನದ ಬಳಿಕ ಲಕ್ಕಿ ಡಿಪ್ ಮೂಲಕ 20 ಪಕ್ಷೇಕರನ್ನ ಆಯ್ಕೆ ಮಾಡಿ, ಒಂದು ಕೋಟಿ ಮೊತ್ತದ 20 ಬಹುಮಾನಗಳನ್ನ ನೀಡಲಾಗುತ್ತೆ ಎಂದು ನಿರ್ಮಾಪಕರಾದ ಶಿವಪ್ರಕಾಶ ಹೇಳಿದ್ದಾರೆ.
10 ಕಾರ್ ಹಾಗೂ 10 ಚಿನ್ನದ ಒಡವೆಗಳನ್ನ ಬಹುಮಾನವಾಗಿ ಇಡಲಾಗಿದೆ. ಮಂಜು ಮಾಂಡವ್ಯ ನಿರ್ದೇಶನದ ಜೊತೆಗೆ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಭರತನಾಗಿ ಮಂಜು ಬಾಹುಬಲಿಯಾಗಿ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ. ಸಾರಾ ಹರೀಶ ಹಾಗೂ ಶ್ರೇಯಾ ಶೆಟ್ಟಿ ನಟಿಯರಾಗಿ ಕಾಣಿಸಿಕೊಂಡಿದ್ದಾರೆ. ಯಾರಿಗೆ ಕಾರ್ ಯಾರಿಗೆ ಒಡವೆ ಸಿಗುತ್ತೆ ನೋಡಬೇಕು.