ಬೆಳ್ಳಂಬೆಳಗ್ಗೆ ‘ನೋಟು ವೋಟು’ ಹೇಳಿಕೆ

360

ಹೊಸಕೋಟೆ: ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ ಇಂದು ಬೆಳಗ್ಗೆ ಇಟ್ಟಸಂದ್ರದಲ್ಲಿ ಪ್ರಚಾರ ಭಾಷಣ ಮಾಡುವ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿದ್ದಾರೆ. ನಾವು ನೋಟು ಕೊಡ್ತೀವಿ. ವೋಟ್ ಹಾಕಿಸಿಕೊಳ್ತೀವಿ ಅಂತಾ ಹೇಳಿದ್ದು ಕೋಲಾಹಲ ಎಬ್ಬಿಸಿದೆ.

ನಾವು ನೋಟು ಕೊಡ್ತೀವಿ. ವೋಟ್ ಹಾಕಿಸಿಕೊಳ್ತೀವಿ. ಕೆಲವರು ಮನಃಸ್ಪೂರ್ತಿಯಾಗಿ ಹಾಕ್ತಾರೆ. ಕೆಲವರು ಬೈಕೊಂಡು ಹಾಕ್ತಾರೆ ಎಂತಾ ಹೇಳಿದ್ದಾರೆ. ನಾನು 40 ರೂಪಾಯಿ ಸಂಬಳ ಪಡೆದು ಕೆಲಸ ಮಾಡಿದ್ದೇನೆ. ಕಷ್ಟಪಟ್ಟು ಹಣ ಸಂಪಾದಿಸಿದ್ದೇನೆ. ಅದಕ್ಕೆ ತೆರಿಗೆ ಕಟ್ಟುತ್ತೇನೆ. ಯಾವುದೇ ಅಕ್ರಮ ಆಸ್ತಿ ಮಾಡಿಲ್ಲ ಅಂತಾ ಹೇಳಿದ್ರು.

ಪ್ರಧಾನಿ ಮೋದಿ ಬಗ್ಗೆ ಮಾತ್ನಾಡಿದ ಅವರು, ಮೋದಿ ಪ್ರಧಾನಿ ಆಗಿರ್ಲಿಲ್ಲಂದ್ರೆ ಇಷ್ಟೊತ್ತಿಗಾಗ್ಲೇ ದೇಶದ ಮೇಲೆ ಬಾಂಬ್ ಬೀಳುತ್ತಿದ್ದವು. ಪಕ್ಕದ ರಾಷ್ಟ್ರಗಳು ದೇಶದ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿವೆ. ಧೈರ್ಯವಂತ ಮೋದಿ ಅವರು ಎಲ್ಲವನ್ನೂ ನಿಭಾಯಿಸ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಅದೇನೆ ಇರ್ಲಿ ನೋಟು.. ವೋಟಿನ ವಿಚಾರ ಇನ್ನು ಎಷ್ಟೊಂದು ಸೌಂಡ್ ಮಾಡುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!