ಕಾಣೆಯಾಗಿದ್ದ ಬಾಲಕಿ ಶವ ಪತ್ತೆ

172

ಪ್ರಜಾಸ್ತ್ರ ಅಪರಾಧ ಸುದ್ದಿ

ಕೋಲಾರ:
ಜಿಲ್ಲೆಯ ಮಾಲೂರು ತಾಲೂಕಿನ ದೊಮ್ಮಲೂರಿನ 9ನೇ ತರಗತಿ ವಿದ್ಯಾರ್ಥಿನಿ ಮೂರು ದಿನಗಳ ಹಿಂದೆ ಕಾಣೆಯಾಗಿದ್ದಳು. ಇಂದು ಶವವಾಗಿ ಪತ್ತೆಯಾದ ದಾರುಣ ಘಟನೆ ಹೊಸಕೋಟೆಯ ಬಾಣರಹಳ್ಳಿ ಹತ್ತಿರ ನಡೆದಿದೆ.

ಬರಗೂರು ಗ್ರಾಮದ ನಿತಿನ್ ಎಂಬಾತ ಬಾಲಕಿಯನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ನೀಚ ಕೃತ್ಯವೆಸಗಿದ ನಿತಿನ್ ತನ್ನ ಕತ್ತು ಕೊಯ್ದುಕೊಂಡು ಬಾಲಕಿ ಮನೆ ಮುಂದಿದ್ದ ಎಂದು ಹೇಳಲಾಗುತ್ತಿದೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿ ನಿತಿನ್ ಯಾವ ಕಾರಣಕ್ಕೆ ಅನ್ಯಾಯವಾಗಿ ಬಾಲಕಿಯ ಜೀವ ತೆಗೆದ ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!