ಪ್ರಜಾಸ್ತ್ರ ಸುದ್ದಿ
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ 5 ಬಸ್ ಗಳಿಗೆ ಸಾರಿಗೆ ಸಿಬ್ಬಂದಿ ಕಲ್ಲು ತೂರಿದ ಪರಿಣಾಬ ಬಸ್ಸಿನ ಗಾಜುಗಳು ಒಡೆದು ಹೋಗಿವೆ. ಹುಣಸೂರು-ಮೈಸೂರು ಮಾರ್ಗ ಮಧ್ಯ ಇರುವ ರಂಗಯ್ಯನಕೊಪ್ಪಲು ಬಳಿ ಬಸ್ ಗೆ ಕಲ್ಲು ಎಸೆಯಲಾಗಿದೆ. ಈ ಘಟನೆಯಲ್ಲಿ ಓರ್ವ ಪ್ರಯಾಣಿಕನ ತಲೆಗೆ ಗಾಯವಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರನ್ನ ನೋಡಿ ಹುಣಸೂರು ಡಿಪೋ ಮೆಕ್ಯಾನಿಕಲ್ ಗಳಾದ ಕೃಷ್ಣಮೂರ್ತಿ ಹಾಗೂ ಸಂತೋಷ ಭಜಂತ್ರಿ ಎಸ್ಕೇಪ್ ಆಗಲು ನೋಡಿದರು. ಅವರನ್ನ ಬೆನ್ನುಹತ್ತಿ ಅರಬ್ಬಿತಿಟ್ಟು ಅರಣ್ಯ ಪ್ರದೇಶದ ರಸ್ತೆಯಲ್ಲಿ ಬಂಧಿಸಲಾಗಿದೆ.