ಪ್ರಜಾಸ್ತ್ರ ಸುದ್ದಿ
ಗದಗ: ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಅವನನ್ನು ಮಾತನಾಡಿಸಿಕೊಂಡು ಬರಲು ಹೊರಟಿದ್ದ ನಾಲ್ವರು ಸ್ನೇಹಿತರಲ್ಲಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ದರ್ಶನ ರಮೇಶ ರಾಜಪುರೋಹಿತ, ಶೌಕತ್ ಅಲಿ ಪಠಾಣ್, ಮೆಹಪೂಜ್ ಮೃತಪಟ್ಟಿದ್ದಾರೆ. ಅಪ್ಸನಾ ಮುಲ್ಲಾ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಸ್ನೇಹಿತನನ್ನು ಭೇಟಿಯಾಗಲು ಕಾರಿನಲ್ಲಿ ಹೊರಟಿದ್ದರು. ಆಗ ಚಾಲಕನ ನಿಯಂತ್ರ ತಪ್ಪಿ ಕಾರು ಮರಕ್ಕೆ ಗುದ್ದಿದೆ. ತಕ್ಷಣ ಬೆಂಕಿ ಹೊತ್ತಿಕೊಂಡಿದೆ.
ಲಾರಿ ಚಾಲಕನೊಬ್ಬ ಘಟನೆ ನೋಡಿ ಹುಡುಗರ ಜೀವ ಉಳಿಸಲು ಹೋಗಿದ್ದಾನೆ. ಆದರೆ, ಬೆಂಕಿಯಿಂದಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಗಾಯಗೊಂಡಿದ್ದಾನೆ. ಈ ಘಟನೆ ಶನಿವಾರ ನಡೆದಿದೆ. ಹುಡುಗರ ಗುರುತು ಪತ್ತೆಯಾಗಿದೆ.