ಪ್ರಜಾಸ್ತ್ರ ಸುದ್ದಿ
ಚಂಡೀಗಢ: ಪಂಜಾಬ್ ಎಎಪಿಯಿಂದ ರಾಜ್ಯಸಭೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಹರ್ಭಜನ್ ಸಿಂಗ್ ಸೇರಿದಂತೆ ನಾಲ್ವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಶಿಕ್ಷಣ ತಜ್ಞ ಸಂಜೀವ್ ಅರೋರಾ, ಲವ್ಲಿ ಪ್ರೊಫೇಷನಲ್ ಯೂನಿರ್ವಸಿಟಿಯ ಕುಲಪತಿ ಡಾ.ಅಶೋಕ್ ಮಿಥಲ್, ಐಐಟಿ ಪ್ರೊಫೆಸರ್ ಸಂದೀಪ್ ಪಾಠಕ್, ಎಎಪಿ ಯುವ ಕಾರ್ಯಕರ್ತ ರಾಘವ್ ಚಡ್ಡಾ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಎಎಪಿಯಿಂದ ನಾಲ್ವರು ರಾಜ್ಯಸಭೆ ಚುನಾವಣೆಗೆ ಸಜ್ಜಾಗಿದ್ದಾರೆ.