ಅಮಿತ ಶಾ ಕಾಣೆ.. ಹುಡುಕಿಕೊಡಿ ಎಂದು ದೂರು

333

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೋವಿಡ್ ಸಂಕಷ್ಟದ ನಡುವೆ ಕೇಂದ್ರ ಗೃಹ ಸಚಿವ ಅಮಿತ ಶಾ ಕಾಣೆಯಾಗಿದ್ದಾರೆ. ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎನ್ಎಸ್ಯುಐ ದೆಹಲಿ ಪೊಲೀಸರಿಗೆ ದೂರು ನೀಡಿದೆ.

ಕರೋನಾ ಸೋಂಕಿನಿಂದ ಜನರು ಸಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾವು ನೋವು ಹೆಚ್ಚಾಗ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಾದ ಅಮಿತ ಶಾ ಯಾವುದೇ ಹೇಳಿಕೆ ನೀಡ್ತಿಲ್ಲ. ಟ್ವೀಟರ್ ನಲ್ಲಿಯೂ ಮಾಹಿತಿ ನೀಡ್ತಿಲ್ಲ. ದಯವಿಟ್ಟು ಅವರನ್ನ ಹುಡುಕಿಕೊಡಿ ಎಂದು ಎನ್ಎಸ್ಯುಐನ ಪ್ರಧಾನ ಕಾರ್ಯದರ್ಶಿ ನಾಗೇಶ ಕರಿಯಪ್ಪ ದೂರು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!