150 ಕೋಟಿ ತಡೆಹಿಡಿದ್ರಾ ಸಿಎಂ? ಸ್ವಪಕ್ಷೀಯ ಶಾಸಕ ಯತ್ನಾಳ ಹೇಳಿದ್ದೇನು?

364

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಕಂದಾಯ ಸಚಿವ ಆರ್.ಅಶೋಕ ನೇತೃತ್ವದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯತ್ನಾಳ ಅಸಮಾಧಾನ ಸ್ಪೋಟಿಸಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆಗೆ ಹಿಂದಿನ ಸಿಎಂ 125 ಕೋಟಿ ಅನುದಾನ ನೀಡಿದ್ರು. ಆದ್ರೇ ಕೋವಿಡ್ 19 ಹೆಸರಲ್ಲಿ ನಮ್ಮ‌ ಸಿಎಂ ಬಿಎಸ್ವೈ ಅನುದಾನ ವಾಪಸ್ ಪಡೆದಿದ್ದಾರೆ ಎಂದು ಯತ್ನಾಳ ಅಸಮಧಾನ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!