ಮಧ್ಯಾಹ್ನ 3 ಗಂಟೆಗೆ ವಾಲೀಕಾರ ಅಂತ್ಯಕ್ರಿಯೆ

425

ಕಲಬುರಗಿ: ಬಂಡಾಯ ಸಾಹಿತಿ, ಕೋಲಿ ಸಮಾಜದ ಮುಖಂಡ ಡಾ.ಚೆನ್ನಣ್ಣ ವಾಲೀಕಾರ ಅವರು, ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ನಿಧನರಾಗಿದ್ದಾರೆ. 78 ವರ್ಷದ ಚೆನ್ನಣ್ಣ ವಾಲೀಕಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ನಗರದ ಸೇಡಂ ರಸ್ತೆಯಲ್ಲಿರುವ ಹಿಂದಿ ಪ್ರಚಾರ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಚಿತ್ತಾಪುರ ತಾಲೂಕಿನ ಶಂಕ್ರವಾಡಿ ಗ್ರಾಮದಲ್ಲಿ 3 ಗಂಟೆಗೆ ಅಂತ್ಯಕ್ರಿಯೆ   ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ .

ಎರಡು ವರ್ಷದ ಹಿಂದೆ ಲಿವರ್ ಕ್ಯಾನ್ಸರ್ ಆಗಿತ್ತು. ಅಂದಿನಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವರ್ಷದಿಂದ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ಅದು ದೇಹದ ಇತರೆ ಭಾಗಗಳಿಗೆ ಹಬ್ಬುತ್ತಿರುವ ಪರಿಣಾಮ ಚಿಕಿತ್ಸೆ ಸ್ಪಂದಿಸಲು ಆಗ್ಲಿಲ್ಲ. ಹೀಗಾಗಿ ಭಾನುವಾರ ರಾತ್ರಿ 10 ಗಂಟೆಗೆ ನಿಧನರಾಗಿದ್ದು, ಅಪರ ಅಭಿಮಾನಿಗಳು, ಸಾಹಿತ್ಯ ಬಳಗ ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!