ಪ್ರಜಾಸ್ತ್ರ ಸುದ್ದಿ
ಅಳ್ನಾವರ: ಗೃಹ ರಕ್ಷಕದಳದಲ್ಲಿ ದಶಕಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಇಬ್ಬರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಆನಂದ ಶಿರಹಟ್ಟಿ, ಗೃಹ ರಕ್ಷಕದಳ ಧಾರವಾಡ ಘಟಕ ಇವರು 12 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯಕುಮಾರ ಕರ್ಜಗಿ ವಾಹನ ಚಾಲಕರಾಗಿ 19 ವರ್ಷದಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಬ್ಬರು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ ಆಗಿದ್ದಾರೆ. ತುರ್ತು ಪರಿಸ್ಥಿಯಲ್ಲಿ ಹಗಲಿರುಳೆನ್ನದೆ ಕರ್ತವ್ಯದಲ್ಲಿ ಭಾಗಿ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಉತ್ತಮವಾಗಿ ಪರಿಸ್ಥಿಯನ್ನು ನಿಭಾಯಿಸಿಸುವುದು ಇದನ್ನೆಲ್ಲ ಪರಿಗಣಿಸಿ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
ಅಳ್ನಾವರ ತಾಲೂಕು ಪ್ರಭಾರ ಘಟಕಾಧಿಕಾರಿ ಎಂ,ಕೆ ಜಾಧವ್ ಅವರ ನೇತೃತ್ವದ ಗೃಹ ರಕ್ಷಕ ದಳದ ತಂಡ ಅಳ್ನಾವರ ತಾಲೂಕು ಕ್ರೀಡಾಂಗಣದಲ್ಲಿ ಸಿಎಂ ಪದಕಕ್ಕೆ ಆಯ್ಕೆಯಾದವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಭೋದಕರಾದ ಬಸವರಾಜ ಅಗಳಕಾರ, ಸಹಾಯಕ ಭೋದಕರಾದ ಟಿ,ಪಿ,ಬಾದಾಮಿ, ಗ್ರಹ ರಕ್ಷಕರು ಹಾಗೂ ಗ್ರಹ ರಕ್ಷಕಿಯರು ಹಾಗೂ ಉಪಸ್ಥಿತರಿದ್ದರು.