ಚಿಟ್ ಚಾಟ್ ಅಶೋಕ್ ಮುದ್ದೇಬಿಹಾಳ ನಿಧನ

161

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ವಿಧಾನಸಭಾ ಚುನಾವಣೆ-2023ರ ವಿಡಿಯೋಗ್ರಾಫಿಯನ್ನು ಒಪ್ಪಿಕೊಂಡು ಜಿಲ್ಲೆಯ ಎಲ್ಲಾ ಛಾಯಾಗ್ರಹಕರನ್ನು ಒಗ್ಗೂಡಿಸಿ ಅಚ್ಚು ಕಟ್ಟಾಗಿ ಕೆಲಸ ಮಾಡಿದ, ಚಿಟ್ ಚಾಟ್ ಅಂತಾನೇ ಕರೆಯಲ್ಪಡುವ ಅಶೋಕ್ ಮುದ್ದೇಬಿಹಾಳ ಅವರು ನಿಧನರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ, ಛಾಯ ವೃತ್ತಿ ಬಾಂಧವರ ಹೆಮ್ಮೆಯ ನಗುಮುಖದ ನಾಯಕರಾಗಿದ್ದರು. ಕಳೆದೊಂದು ತಿಂಗಳಿಂದ ಅನಾರೋಗ್ಯದ ಕಾರಣದಿಂದಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಚಿಟ್ ಚಾಟ್ ಅಶೋಕ್ ಮುದ್ದೇಬಿಹಾಳ ಅವರ ನಿಧನಕ್ಕೆ ಕೆಪಿಎ ಆಡಳಿತ ಮಂಡಳಿ ಸೇರಿದಂತೆ ಸ್ನೇಹಿತ ವಲಯ ಸಂತಾಪ ಸೂಚಿಸಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!