ಪ್ರಜಾಸ್ತ್ರ ಸುದ್ದಿ
ನಾಗ್ಪುರ: ಟ್ರಕ್ ಹಾಗೂ ಕ್ವಾಲಿಸ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದಾಗಿ 6 ಜನರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಶನಿವಾರ ನಡೆದಿದೆ.
ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವೈಭವ್ ಚಿಖಲೆ, ಅಜಯ್ ಚಿಖಲೆ, ಸುಧಾಕರ್ ಮಾನಕರ್, ರಮೇಶ್ ಹಲೊಂಡೆ, ವಿಠ್ಠಲ್ ತೋಟೆ, ಮಯೂರ್ ಇಂಗಳೆ ಮೃತ ದುರ್ದೈವಿಗಳು.
ಮೃತರೆಲ್ಲ ನಾಗ್ಪುರ್ ಜಿಲ್ಲೆ ಕಟೋಲ್ ತಾಲೂಕಿನ ಮೆಂಡಿಪಥರ್ ಗ್ರಾಮದವರೆಂದು ತಿಳಿದು ಬಂದಿದೆ. ಕಟೋಲ್ ಗೆ ಹೊರಟಿದ್ದಾಗ ಸೋಂಖಾಂಬ್ ಹಾಗೂ ತಾರಾಬೋಡಿ ಗ್ರಾಮಗಳ ನಡುವೆ ಅಪಘಾತ ನಡೆದಿದೆ. ಗಾಯಳು ಜಗದೀಶ್ ಧೋನ್ ಸ್ಥಿತಿ ಗಂಭೀರವಾಗಿದೆ.