ದಲಿತರು, ಲಿಂಗಾಯತರೆಂದರೆ ಬಿಜೆಪಿಗೆ ತಾತ್ಸಾರವೇಕೆ: ಕಾಂಗ್ರೆಸ್

189

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಸ್ತೂರಿ ರಂಗನ್ ವರದಿ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ, ಕಲ್ಯಾಣ ಕರ್ನಾಟಕ ಭಾಗದ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.

ಖಂಡ್ರೆ ಬದಲು ಖರ್ಗೆ ಎಂದು ಸಮರ್ಥಸಿಕೊಂಡಿರುವ ಕುರಿತು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.  ಆಹಾ ಎಂಥಹ ಸಮರ್ಥನೆ! ಆರಗ ಜ್ಞಾನೇಂದ್ರ ಅವರೆ ಖಂಡ್ರೆಯವರ ಮೈ ಬಣ್ಣದ ಬಗ್ಗೆ ಮುಲಾಜಿಲ್ಲದೆ ಅವಮಾನಿಸಬಹುದು ಎಂಬುದನ್ನು ಹೇಳುತ್ತಿದ್ದಾರೆಯೇ? ಸ್ವಪಕ್ಷದ ಲಿಂಗಾಯತರನ್ನು ತುಳಿದಿದ್ದಾಯ್ತು. ಈಗ ಇತರ ಪಕ್ಷದ ಲಿಂಗಾಯತ ನಾಯಕರನ್ನು ಅವಮಾನಿಸಲು ಮುಂದಾಗಿದೆಯೇ ಬಿಜೆಪಿ? ದಲಿತರು, ಲಿಂಗಾಯತರೆಂದರೆ ಬಿಜೆಪಿಗೆ ಇಷ್ಟೊಂದು ತಾತ್ಸಾರವೇಕೆ ಅಂತಾ ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.




Leave a Reply

Your email address will not be published. Required fields are marked *

error: Content is protected !!