ಪ್ರಜಾಸ್ತ್ರ ಸುದ್ದಿ
ಮೈಸೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ವಿರೋಧ ಪಕ್ಷದವರು ಸೇರಿದಂತೆ ಸ್ವಪಕ್ಷದವರು ಸಹ ಕಿಡಿ ಕಾರುತ್ತಿದ್ದಾರೆ. ಬಿಎಸ್ವೈ ಕಂಪ್ಲೀಟ್ ಕುಟುಂಬ ರಾಜಕಾರಣ ಮಾಡುತ್ತಿದ್ದು, ವಿಜಯೇಂದ್ರನ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಭಾನುವಾರ ಕಾಂಗ್ರೆಸ್ ಶಾಸಕ ಹೆಚ್.ಪಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಇಲ್ಲ ಅಂತಾರೆ. ಕುಟುಂಬದವರು ಕೇಳಿದ್ರೆ ಅನುದಾನವನ್ನೇ ಬಿಡುಗಡೆ ಮಾಡುತ್ತಾರೆ ಅನ್ನೋ ಆರೋಪ ಮಾಡಿದ್ದಾರೆ. ಸಿಎಂ ತಂಗಿಯ ಮಗನ 16 ಎಕರೆ ಫಾರ್ಮ್ ಹೌಸ್ ಇದೆ. ಕರೆಗಳನ್ನು ಒತ್ತುವರಿ ಮಾಡಿ ಫಾರ್ಮ್ ಹೌಸ್ ಮಾಡಿದ್ದಾರೆ. ಅಲ್ಲಿಗೆ ಹೋಗಲು, ಕೆರೆ ಕಟ್ಟೆ ನಿರ್ಮಾಣಕ್ಕಾಗಿ 3 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇವರು ವಿಶೇಷ ಅನುದಾನ ಏನು ನೀಡುವುದು ಬೇಡ. ಮೈತ್ರಿ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾನ ನೀಡಲಿ. ಅದನ್ನು ತಡೆ ಹಿಡಿದು, ಕುಟುಂಬ ರಾಜಕಾರಣ ಮಾಡುತ್ತಾ ಪುತ್ರ ವ್ಯಾಮೋಹ ಹೊಂದಿದ್ದಾರೆ ಅಂತಾ ಕಿಡಿ ಕಾರಿದ್ದಾರೆ.