ಯಡಿಯೂರಪ್ಪ ಸಿಡಿ ಇಟ್ಕೊಂಡು ಮಂತ್ರಿ ಆಗ್ಯಾರ: ಯತ್ನಾಳ

438

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸಚಿವರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಬಿಎಸ್ವೈಯವರ ಸಿಡಿಯಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಸಚಿವರು ಆಗಿದ್ದಾರೆ ಎಂದು ಶಾಸಕ ಯತ್ನಾಳ ಮತ್ತೊಂದು ಹೊಸ ಬಾಂಬ್ ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಜೆ.ಡಿ.ಪಾಟೀಲ, ಮೇಟಿ ಸಿಡಿ ಮಾಡಿದವರು ನಾಲಾಯಕರು. ಯಾರು ಯಾರಿಗೆ ಸಪ್ಲೈಯರ್ ಆಗಿದ್ದಾರೆ ಅವರು ನಾಲಾಯಕರ್. ಇಂತಹ ನಾಲಾಯಕರಿಂದ ನಾನೇನು ಕಲಿಯಬೇಕಾಗಿಲ್ಲ. ಸಪ್ಲೈಯರ್ ಗಳು ಯಡಿಯೂರಪ್ಪನವರಿಗೆ, ಮೇಲನವರಿಗೆ ಏನು ಸಪ್ಲೈ ಮಾಡಕತ್ತಾರ ಎಲ್ಲಾನೂ ಕಾಲ ಬರುತ್ತೆ ಹೇಳ್ತೀನಿ.

ರಾಮನ ಬಗ್ಗೆ, ಬ್ರಹ್ಮನ ಬಗ್ಗೆ ಮಾತ್ನಾಡುವ ಇಂಥಾ ಕಳ್ಳರು ಯಡಿಯೂರಪ್ಪನವರ ಸಿಡಿ ಇಟ್ಕೊಂಡು ಮಂತ್ರಿ ಆಗ್ಯಾರ ಎಂದು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!