ಮಂಡ್ಯ: ಜಿಲ್ಲೆಯ ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಸಾತೇನಹಳ್ಳಿ ಕಂಟೈನ್ ಮೆಂಟ್ ಝೋನ್ ಪ್ರದೇಶಕ್ಕೆ ಐಜಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕೋವಿಡ್ 19ಗೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿಯನ್ನ ಪಡೆದುಕೊಂಡ್ರು.
ಇನ್ನು ಇದೇ ಸಂದರ್ಭದಲ್ಲಿ ಸಾತೇಹಳ್ಳಿ ಗ್ರಾಮಸ್ಥರೊಡನೆ ಸಮಾಲೋಚನೆ ನಡೆಸಿ, ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗು ಹ್ಯಾಂಡ್ ಗ್ಲೌಸ್ ಗಳನ್ನ ವಿತರಿಸಿ, ಕರೋನಾ ಕುರಿತು ತಿಳುವಳಿಕೆ ನೀಡಿದ್ರು.
ಇದಾದ ಬಳಿಕ ಪೊಲೀಸ್ ಅಧಿಕಾರಿಗಳಿಗೆ, ನಾಗಮಂಗಲ ತಹಶೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿ, ತಾಲೂಕು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗು ಉಪವಿಭಾಗಾಧಿಕಾರಿ ಸೇರಿ ಇತರೆ ಅಧಿಕಾರಿಗಳು ಕರೋನಾ ವೈರಾಣು ತಡೆಗಟ್ಟುವ ಕುರಿತು ಸೂಕ್ತ ನಿರ್ದೇಶನಗಳನ್ನ ನೀಡಿದರು.