ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ.
ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಜನರು ಮನೆಯಿಂದ ಹೊರ ಬರಲು ಹಿಂದುಮುಂದು ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಯವುದೇ ರೀತಿಯ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ.
ಇನ್ನು ವ್ಯಾಪಾರ ವಹಿವಾಟಿನ ಮೇಲೂ ಮಳೆ ಬರೆ ಎಳೆದಿದೆ. ಸರಿಯಾಗಿ ವ್ಯಾಪಾರವಾಗದೆ ಅಂಗಡಿಕಾರರು ಚಿಂತೆಗಿಡಾಗಿದ್ದಾರೆ. ಮಳೆ ಬಿಡುವು ಕೊಟ್ಟರೆ ಒಳ್ಳೆಯದು ಎಂದು ರೈತರು ಸೇರಿದಂತೆ ಎಲ್ಲರೂ ಬೇಡಿಕೊಳ್ಳುತ್ತಿದ್ದಾರೆ. ಆದರೆ, ಇನ್ನು ನಾಲ್ಕೈದು ದಿನ ಮಳೆ ಮುಂದುವರೆಯುತ್ತೆ ಎನ್ನಲಾಗುತ್ತಿದೆ.