ದೇಶದಲ್ಲಿ ಚೀನಾ ಕರೋನಾ ಹಬ್ಬಿಸಿದ್ದು ಕಾಂಗ್ರೆಸ್

235

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಚೀನಾ ದೇಶಕ್ಕೆ ಕೋವಿಡ್ ನೀಡಿದೆ. ಇದನ್ನು ಎಲ್ಲೆಡೆ ಹಬ್ಬಿಸಿದ್ದು ಕಾಂಗ್ರೆಸ್ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬರೆದ ಬಹಿರಂಗ ಪತ್ರದಲ್ಲಿ ಈ ರೀತಿ ಆರೋಪಿಸಿದ್ದಾರೆ.

ನೀವು, ಡಿಕೆ ಶಿವಕುಮಾರ, ಯು.ಟಿ ಖಾದರ್, ಜಯರಾಮ ರಮೇಶ, ಕೆ.ಸಿ ವೇಣುಗೋಪಾಲ, ಮನಿಷ ತಿವಾರಿ ಸೇರಿದಂತೆ ಮತ್ತಿತರೆ ಕಾಂಗ್ರೆಸ್ ನಾಯಕರು ಆರಂಭದಲ್ಲಿ ಲಸಿಕೆ ಅಪಪ್ರಚಾರ ಮಾಡಿದೀರಿ. ಹೀಗಾಗಿ ಜನರು ಹಿಂದೇಟು ಹಾಕಿದರು. ಇದು ಸೋಂಕು ಹರಡಲು ಕಾರಣವಾಯ್ತು.

ತಮ್ಮ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ಚೈತನ್ಯ ಕಳೆದುಕೊಂಡಿದೆ ಎಂದು ಅಪಪ್ರಚಾರ ಮಾಡ್ತಿದೀರಿ. ವಿರೋಧ ಪಕ್ಷದ ನಾಯಕರಾಗಿ ದೇಶದ ಸಂಕಷ್ಟದ ಬಗ್ಗೆ ರಚನಾತ್ಮಕ ಸಲಹೆ ನೀಡಬೇಕು. ರಾಜಕಾರಣ ಮಾಡುವುದು ಸರಿಯಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!