ಆಲಮೇಲ: ಜಿ.ಆರ್ ಗ್ರೂಪ್ ಧಾರವಾಡ ಇದರ ಮುಖ್ಯಸ್ಥರಾದ ಶಿವಾನಂದ ಪಾಟೀಲ ಸೋಮಜಾಳ ಅವರು, ಈಗಾಗ್ಲೇ ಸಿಂದಗಿ ತಾಲೂಕಿನ ಭಾಗದಲ್ಲಿ ಕರೋನಾ ವಾರಿಯರ್ಸ್ ಗೆ ಉಪಹಾರ, ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ದೇ, ತಾಲೂಕಿನ ಹಲವು ಹಳ್ಳಿಗಳಲ್ಲಿ ಮಾಸ್ಕ್ ವಿತರಣೆ ಸಹ ಮಾಡಿದ್ದಾರೆ. ಇದೀಗ ನೂತನ ತಾಲೂಕು ಆಲಮೇಲದಲ್ಲಿಯೂ ಈ ವ್ಯವಸ್ಥೆ ಮಾಡಿದ್ದಾರೆ.
ಆಲಮೇಲ ಭಾಗದ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ, ಪೌರ ಕಾರ್ಮಿಕರು ಸೇರಿದಂತೆ ಕರೋನಾ ವೈರಸ್ ವಿರುದ್ಧ ಸತತವಾಗಿ ಕಾರ್ಯನಿರ್ವಹಿಸ್ತಿರುವ ಅಧಿಕಾರಿಗಳಿಗೆ, ಸಿಬ್ಬಂದಿ, ಕಾರ್ಮಿಕರಿಗೆ ಬೆಳಗಿನ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡುವ ಮೂಲಕ, ಸಾರ್ವಜನಿಕರ ಸೇವೆಗೆ ಕಂಕಣಬದ್ಧರಾಗಿ ನಿಂತಿರುವ ಕರೋನಾ ವಾರಿಯರ್ಸ್ ಗೆ ಒಂದಿಷ್ಟು ಸೇವೆಯನ್ನ ಶಿವಾನಂದ ಪಾಟೀಲ ಸೋಮಜಾಳ ಅವರು ಸಲ್ಲಿಸ್ತಿದ್ದಾರೆ.
ಶಿವಾನಂದ ಪಾಟೀಲ ಸೋಮಜಾಳ ಅವರ ಅನುಪಸ್ಥಿತಿಯಲ್ಲಿ ಅವರು ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಉಪಹಾರ ಹಾಗೂ ಊಟದ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡ್ರು. ಈ ವೇಳೆ ಪರಮಾನಂದ ಬಗಲಿ, ಭೀಮು ಪ್ರಶಾಂತ್ ಗೌಡ ಪಾಟೀಲ, ಶಂಕರ್ ಗೌಡ, ಮಾಂತು ಪರಗೊಂಡ, ಮೌನೇಶ ಬಿರಾದಾರ, ರಮೇಶ ಹೆಬ್ಬಾಳ, ರಾಜು ಬಗಲಿ, ಶಂಕರಗೌಡ ಹಚಡದ, ಸಂತೋಷ ಜೋಗುರ ಭಾಗಿಯಾಗಿ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಮಾಡುವ ಮೂಲಕ ಸತತವಾಗಿ ಸಾರ್ವಜನಿಕರ ಸಲುವಾಗಿ ಶ್ರಮವಹಿಸ್ತಿರುವವರಿಗೆ ಸೇವೆ ಸಲ್ಲಿಸಿದ್ರು.