ಹುಬ್ಬಳ್ಳಿ : ದೇಶ ಮತ್ತು ಸೈನಿಕರ ಮೇಲೆ ಸಂಶಯ ಪಡುವ ಕಾಂಗ್ರೆಸ್ ಹೆತ್ತಮ್ಮನ ಮೇಲೆ ನಂಬಿಕೆ ಇಡಲು ಸಾಧ್ಯವೇ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಪ್ರಶ್ನಿಸಿದರು. ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ರಾಯನಾಳ ಗ್ರಾಮದಲ್ಲಿ ಪ್ರಚಾರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಲ್ಲಿಯೇ ವಾಸವಿದ್ದು ಭಾರತೀಯ ಸೈನಿಕರ ಮೇಲೆ ಸಂಶಯ ಪಡುವ ಇವರು, ಯಾವ ದೇಶದವರು ಎಂಬುದನ್ನು ಜನತೆಗೆ ಪ್ರಶ್ನಿಸಿದರು.
ಸಚಿವ ಜಮೀರ್ ಅಹ್ಮದ್ ಕಳೆದ ಚುನಾವಣೆ ಮತ್ತು ಪ್ರಸ್ತುತ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಬಿಜೆಪಿಗೆ ಮತ ಹಾಕಬಾರದು ಎಂದು ಹುಕುಂ ಹೊರಡಿಸಿದ್ದಾರೆ. ಜಾತಿ-ಜಾತಿಗಳ ಮಧ್ಯೆ ಕಂದಕ ಮೂಡಿಸುವ ಯತ್ನ ಮಾಡುತ್ತಿರುವ ಕಾಂಗ್ರೆಸಗೆ ಹಿಂದುಗಳು ಸಹ ಮತ ನೀಡಬೇಡಿ ಅಂತಾ ಹೇಳಿದರು.
ಸಿ.ಟಿ ರವಿ, ಶಾಸಕ
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸೋಲಿಗೆ ರೇವಣ್ಣ ನಿಂಬೆಹಣ್ಣು ಕೆಲಸ ಮಾಡಲಿದೆ. ಕೌಂಟುಬಿಕವಾಗಿ ಯಾವುದೇ ಮನೆಯಲ್ಲೂ ತಂದೆ ನಂತರ ಮನೆ ಹಿರಿಯ ಮಗನಿಗೆ ಸಂಪೂರ್ಣ ಹಿರಿತನ ಸಿಗಬೇಕು. ಆದರೆ ದೇವೆಗೌಡ್ರ ಕುಟುಂಬದಲ್ಲಿ ಹಿರಿಯ ಮಗ ರೇವಣ್ಣನಿಗೆ ಅನ್ಯಾಯವಾಗಿದೆ. ಹೀಗಾಗಿ ದೇವೆಗೌಡ್ರ ಎರಡನೇ ಜನರೇಷನಲ್ಲಾದರೂ ನ್ಯಾಯ ಪಡೆಯಲು ರೇವಣ್ಣ ಅವರು ನಿಖಿಲ್ ಕುಮಾರಸ್ವಾಮಿ ಸೋಲಿಸಲು ರಣತಂತ್ರ ರೂಪಿಸಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣನಿಗೆ ಗೌಡ್ರ ಕುಟುಂಬದ ಹಿರಿತನ ಕೊಡಿಸಲು ರೇವಣ್ಣ ನಿಂಬೆಹಣ್ಣು ತಿರುವಿದ್ದಾರೆ.