ಸಿ.ಟಿ ರವಿ ಒಬ್ಬ ಕ್ರಿಮಿನಲ್: ಸಿದ್ದರಾಮಯ್ಯ

153

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಸಿ.ಟಿ ರವಿಗೆ ಜಾತ್ಯಾತೀತದ ಅರ್ಥವೇ ಗೊತ್ತಿಲ್ಲ. ಅವನೊಬ್ಬ ಕ್ರಿಮಿನಲ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಸಿ.ಟಿ ರವಿ ಒಬ್ಬ ಕಮ್ಯೂನಲ್ ಫೆಲೋ, ಆತನಿಗೆ ಜಾತ್ಯಾತೀತದ ಅರ್ಥವೇ ಗೊತ್ತಿಲ್ಲ. ಆತನ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂ ಅರ್ಚಕರ ಹತ್ಯೆಗಳು ಆಗುತ್ತವೆ. ಬಿಜೆಪಿ ಬಂದರೆ ದತ್ತಪೀಠದಲ್ಲಿ ಪೂಜೆ ಆಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ಅವರನ್ನು ಸಿದ್ರಾಮುಲ್ಲಾಖಾನ್ ಎಂದಿದ್ದು ಭಾರೀ ಟೀಕೆಗೆ ಗುರಿಯಾಗಿದೆ.




Leave a Reply

Your email address will not be published. Required fields are marked *

error: Content is protected !!