ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋರಮಂಗಲದಲ್ಲಿನ ಕಾಫಿ ಕೆಫೆಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಅನಾಹುತವಾದ ಘಟನೆ ಬಧುವಾರ ನಡೆದಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ಅವಗಡ ಸಂಭವಿಸಿದೆ.
ಸಿಲಿಂಡರ್ ಸ್ಫೋಟದ ಭಯಕ್ಕೆ ಯುವಕನೊಬ್ಬ ಮಹಡಿ ಮೇಲಿಂದ ಹಾರಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಜೀವನ ಹಾನಿ ಆಗಲಿ, ಬೆಂಕಿಯಿಂದ ಗಾಯಗೊಂಡವರ ಕುರಿತಾಗಲಿ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.