ಪ್ರಜಾಸ್ತ್ರ ಕ್ರೀಡಾ ಸುದ್ದಿ
ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಅನುಭವಿಸುವ ಮೂಲಕ, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಮುಂದುವರೆದಿದೆ. ಹೀಗೆ ಸತತ ಸೋಲುಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿರುವ ಕ್ಯಾಪ್ಟನ್ ಧೋನಿ, ಯುವಕರಲ್ಲಿ ಪಂದ್ಯ ಗೆಲ್ಲುವ ಕಿಚ್ಚು ಇಲ್ಲವೆಂದು ಕಾಮೆಂಟ್ ಮಾಡಿದ್ರು.
ಧೋನಿ ಹೇಳಿಕೆ ಬೆನ್ನೆಲ್ಲೇ ಅಭಿಮಾನಿಗಳು, ಹಿರಿಯ ಮಾಜಿ ಕ್ರಿಕೆಟ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವಕರಿಗೆ ಅವಕಾಶ ಕೊಡದೆ, ಅವರಿಗೆ ಗೆಲ್ಲುವ ತುಡಿತವಿಲ್ಲ ಅನ್ನೋದು ತಪ್ಪು. ಜಾಧವ ಟೂರ್ನಿಯಲ್ಲಿ ಫೇಲ್ ಆಗಿದ್ರೂ ಅವಕಾಶ ನೀಡಲಾಗ್ತಿದೆ. ಜಡೇಜ್ ಸಹ ವೈಫಲ್ಯ ಎದುರಿಸ್ತಿದ್ದು, ಇವರಿಗೆ ಯಾಕೆ ಹೊರಗೆ ಇಟ್ಟಿಲ್ಲವೆಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ನಾಯಕ ಶ್ರೀಕಾಂತ, ಧೋನಿ ಬೆಸ್ಟ್ ಆಟಗಾರ ಅನ್ನೋದು ಸತ್ಯ. ಆದ್ರೆ, ರಾಯಲ್ಸ್ ಎದುರು ಸೋತ ಬಳಿಕ ಅವರು ಆಡಿದ ಮಾತು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇದಾರ ಜಾಧವ 8 ಪಂದ್ಯಗಳಲ್ಲಿ ಕೇವಲ 62 ರನ್ ಗಳಿಸಿದ್ದಾರೆ. ಆರ್ ಸಿಬಿ ವಿರುದ್ಧ 1 ಪಂದ್ಯವಾಡಿದ 24 ವರ್ಷದ ಎನ್ ಜಗದೀಶನ್ 33 ರನ್ ಗಳಿಸಿದ್ರೂ ಅವನಿಗೆ ಮತ್ತೆ ಅವಕಾಶ ನೀಡಿಲ್ಲ. ಬೌಲರ್ ಪಿಯುಷ್ ಚಾವ್ಲಾ, ಜಾಧವ ಬಳಿ ತುಡಿತ ಇದ್ಯಾ ಎಂದು ಪ್ರಶ್ನಿಸಿದ್ದಾರೆ.