ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಗೋಕಾಕದಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ, ಸಿಡಿ ಬಿಡುಗಡೆ ಮಾಡುವುದಾಗಿ ನಿನ್ನೆ ತಡರಾತ್ರಿವರೆಗೂ ಡಿ.ಕೆ ಶಿವಕುಮಾರ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದರು.
ಕೊನೆ ಕ್ಷಣದವರೆಗೂ ನನಗೆ ಹೆದರಿಸಲು ನೋಡಿದ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ಅದ್ಯಾವ ಸಿಡಿ ಬಿಡುತ್ತೆ ಬಿಡೋ ಮಗನೆ ಎಂದಿದ್ದೇನೆ. ಬಿಜೆಪಿ ನನ್ನ ಮೇಲೆ ವಿಶ್ವಾಸವಿಟ್ಟಿದೆ. ಹಿಂದೆ ಸರಿಯುವ ಮಾತೇ ಇಲ್ಲ. ಡಿ.ಕೆ ಶಿವಕುಮಾರ್ ವಿಷಕನ್ಯೆಯಿಂದ ದೂರ ಇರಬೇಕು. ಇಲ್ಲದಿದ್ದರೆ ನಾಶವಾಗುತ್ತಾನೆ.
ಡಿ.ಕೆ ಶಿವಕುಮಾರ್ ದೊಡ್ಡ ರಾಜಕಾರಣಿ. ಮುಖ್ಯಮಂತ್ರಿ ಆಕಾಂಕ್ಷಿ. ನನ್ನ ಜೊತೆಗೆ ಇದ್ದಾಗ ಬಹಳ ಒಳ್ಳೆಯವನಿದ್ದ. ಗೆಳೆತನಕ್ಕೆ ಒಳ್ಳೆಯ ಮನುಷ್ಯ. ಆದರೆ, ಈಗ ಯಾಕೆ ಹಿಂಗಾದ ಗೊತ್ತಿಲ್ಲ. ಅವನ ಬಳಿ ಯಾವುದೋ ಆಡಿಯೋ ಇದೆ ಅಂತಾನೆ. ಅದು ನನಗೆ ಗೊತ್ತಿಲ್ಲ. ನಾನು ಯಾರೊ ದೊಡ್ಡವರಿಗೆ ಬೈದಿದ್ದ ಕಟ್ ಅಂಡ್ ಪೇಸ್ಟ್ ಮಾಡಿದ್ದಾನೆ ಅಂತಾ ವಾಗ್ದಾಳಿ ನಡೆಸಿದರು.