ಪ್ರಜಾಸ್ತ್ರ ಸುದ್ದಿ
ಚಿತ್ತಾಪುರ: ಕಣ್ಣಿನ ದೃಷ್ಟಿ ಸರಿಯಿಲ್ಲ ವಯೋವೃದ್ಧ ಮತದಾರರ ಸಹಾಯಕ್ಕೆ ನಿಂತ ಅಧಿಕಾರಿ ಬಿಜೆಪಿಗೆ ಮತ ಹಾಕಿಸಿದ ಘಟನೆ ಬೆಳಕಿಗೆ ಬಂದಿದೆ. ಚಿತ್ತಾಪುರ ಮತಕ್ಷೇತ್ರದ ಚಾಮನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೇಂದ್ರ ಚುನಾವಣಾ ಸಿಬ್ಬಂದಿ ಬಿ.ಸಿ ಚೌಹಾಣ್ ಈ ರೀತಿ ಮಾಡಿರುವುದು ಬೆಳಕಿಗೆ ಬಂದಿದೆ.
ವಯೋವೃದ್ಧರ ಸಹಾಯಕ್ಕೆ ನಿಂತ ಬಿ.ಸಿ ಚೌಹಾಣ್, ಬಿಜೆಪಿಯ ಬಟನ್ ಒತ್ತಿಸಿರುವುದು ಕಂಡು ಬಂದಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಶಾಸಕ ಪ್ರಿಯಾಂಕ್ ಖರ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರಾಗಿ ಒಂದು ಪಕ್ಷದ ಪರ ಕೆಲಸ ಮಾಡಲು ನಾಚೀಕೆ ಆಗುವುದಿಲ್ವಾ ಎಂದು ಕಿಡಿ ಕಾರಿದರು.
ಸಿಬ್ಬಂದಿ ಬದಲಾಯಿಸುವ ತನಕ ಮತದಾನ ಪ್ರಕ್ರಿಯೆ ನಡೆಸಬಾರದೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು. ಬಿ.ಸಿ ಚೌಹಾಣ್ ಬದಲಾಯಿಸಿ ಮತ್ತೊಬ್ಬ ಸಿಬ್ಬಂದಿ ನೇಮಿಸಿದ ಬಳಿಕ ಮತದಾನ ನಡೆಸಲಾಯಿತು.